ಸೋಮವಾರ, ಸೆಪ್ಟೆಂಬರ್ 30, 2013

ಆಪ್ತಮಿತ್ರ : ಕಣಕಣದೆ ಶಾರದೆ : Kanakanade Sharade

ಹಾಡು: ಕಣಕಣದೆ ಶಾರದೆ
ಚಲನಚಿತ್ರ: ಆಪ್ತಮಿತ್ರ
ಸಂಗೀತ ನಿರ್ದೇಶಕರು: ಗುರುಕಿರಣ್
ಕವಿ: ಕವಿರಾಜ್
ವರ್ಷ: 2004
ಹಾಡುಗಾರರು: ಮಧು ಬಾಲಕೃಷ್ಣನ್
ಪಾತ್ರದಾರಿಗಳು: ಡಾ|| ವಿಷ್ಣುವರ್ಧನ್, ರಮೇಶ್, ಅವಿನಾಶ್, ಸೌಂದರ್ಯ, ಪ್ರೇಮ
ಚಿತ್ರದ ನಿರ್ದೇಶಕರು: ಪಿ. ವಾಸು
ನಿರ್ಮಾಪಕರು: ದ್ವಾರಕೀಶ್ ಚಿತ್ರ

ಹಾಡು ಕೇಳಿ...

ಕಣಕಣದೆ ಶಾರದೆ ಕಲೆತಿಹಳು ಕಾಣದೆ
ವನವನದಲ್ಲು ಕುಹುಕುಹು ಗಾನ
ಝರಿಝರಿಯಲ್ಲೂ ಝುಳುಝುಳು ಧ್ಯಾನ
ವಿಧವಿಧದಾ ನಾದ ಅವಳು ನುಡಿಸುತಿಹಳು ||ಪ||

ಜನನಕು ಹಾಡು ಮರಣಕು ಹಾಡು ಲಾಲಿ ಚರಮಗಳು
ಪ್ರತಿ ಎದೆಯಾಳದಲು ಲಯ ತಾಳ ಗೀತೆ ಬದುಕಿನಲು
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ನುಲಿದು ನಲಿದು ಹರಿದು ಬರುವುದು ಶ್ರುತಿ ಲಯವು ||೧||

ಕುಲನೆಲದಾಚೆ ಅರಿಯುವ ಭಾಷೆ ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರಿಲ್ಲ ಸಪ್ತ ಸ್ವರಗಳಿಗೆ
ನಿಪಮಪನಿ ಸನಿಪನಿಸ ಗಸನಿಸಗಾ ಮಪಮಪಗಾ
ನಿಪಮಪನಿ ಸನಿಪನಿಸ ಗಸನಿಸಗಾ ಆ ಆ ಆ ಆ  ||೨||


Kanakanade Sharade, Aptamitra, Gurukiran, Kaviraj, 2004, Madhu Balakrishnan, Dr. Vishnuvardhan, Soundarya, Ramesh, Prema, Avinash

ಬಂಗಾರದ ಮನುಷ್ಯ : ಆಗದು ಎಂದು ಕೈಕಟ್ಟಿ ಕುಳಿತರೆ : Agadu Endu Kaikatti

ಹಾಡು: ಆಗದು ಎಂದು ಕೈಕಟ್ಟಿ ಕುಳಿತರೆ
ಚಲನಚಿತ್ರ: ಬಂಗಾರದ ಮನುಷ್ಯ
ಸಂಗೀತ ನಿರ್ದೇಶಕರು: ಜಿ.ಕೆ. ವೆಂಕಟೇಶ್
ಕವಿ:  ಆರ್.ಎನ್. ಜಯಗೋಪಾಲ್
ವರ್ಷ: 1972
ಹಾಡುಗಾರರು: ಡಾ|| ಪಿ.ಬಿ. ಶ್ರೀನಿವಾಸ್
ಪಾತ್ರದಾರಿಗಳು: ಡಾ|| ರಾಜ್ ಕುಮಾರ್, ಭಾರತಿ, ಬಾಲಕೃಷ್ಣ, ಶ್ರೀನಾಥ್, ವಜ್ರಮುನಿ, ದ್ವಾರಕೀಶ್, ಲೋಕನಾಥ್
ಚಿತ್ರದ ನಿರ್ದೇಶಕರು: ಸಿದ್ಧಲಿಂಗಯ್ಯ
ನಿರ್ಮಾಪಕರು: ಶ್ರೀನಿಧಿ ನಿರ್ಮಾಣ 

ಹಾಡು ಕೇಳಿ...

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಆಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ   ||ಪ||


ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು ||ಅ.ಪ||

ಕೆತ್ತಲಾದು ಕಗ್ಗಲ್ಲೆಂದು ಎದೆಗೊಂದಿದ್ದರೆ ಶಿಲ್ಪಿ
ಆಗುತ್ತಿತ್ತೇ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೇಬೀಡು ||೧||

ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಬಂಗಾರ ಬೆಳೆವ ಹೊನ್ನಾಡು
ಅಹ ಬಂಗಾರ ಬೆಳೆವ ಹೊನ್ನಾಡು
ಆಗುತ್ತಿತ್ತೇ ಈ ನಾಡು ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು ||೨||

ಕೈಕೆಸರಾದೆರೆ ಬಾಯ್ಮೊಸರೆಂಬ ಹಿರಿಯರ
ಅನುಭವ ಸತ್ಯ
ಇದ ನೆನಪಿಡಬೇಕು ನಿತ್ಯ
ದುಡಿಮೆಯ ನಂಬಿ ಬದುಕು
ಅದರಲೇ ದೇವರ ಹುಡುಕು, ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು ||೩||


Agadu Endu Kaikatti Kulitare, Bangarada Manushya, G.K. Venkatesh, R.N. Jayagopal, 1972, P.B. Srinivas, Dr. Rajkumar, Bharathi, Balakrishna, Lokanath, Srinath, Vajramuni, Dwarakish

ಬಂಗಾರದ ಮನುಷ್ಯ : ನಗುನಗುತಾ ನಲಿ ನಲಿ : Nagunaguta Nali Nali

ಹಾಡು: ನಗುನಗುತಾ ನಲಿ ನಲಿ
ಚಲನಚಿತ್ರ: ಬಂಗಾರದ ಮನುಷ್ಯ
ಸಂಗೀತ ನಿರ್ದೇಶಕರು: ಜಿ. ಕೆ. ವೆಂಕಟೇಶ್
ಕವಿ: ಹುಣಸೂರು ಕೃಷ್ಣಮೂರ್ತಿ
ವರ್ಷ: 1972
ಹಾಡುಗಾರರು: ಡಾ|| ಪಿ.ಬಿ. ಶ್ರೀನಿವಾಸ್
ಪಾತ್ರದಾರಿಗಳು: ಡಾ|| ರಾಜ್ ಕುಮಾರ್, ಭಾರತಿ, ಬಾಲಕೃಷ್ಣ, ಶ್ರೀನಾಥ್, ವಜ್ರಮುನಿ, ದ್ವಾರಕೀಶ್, ಲೋಕನಾಥ್
ಚಿತ್ರದ ನಿರ್ದೇಶಕರು: ಸಿದ್ಧಲಿಂಗಯ್ಯ
ನಿರ್ಮಾಪಕರು: ಶ್ರೀನಿಧಿ ನಿರ್ಮಾಣ

ಹಾಡು ಕೇಳಿ...

ನಗುನಗುತಾ ನಲಿ ನಲಿ
ಎಲ್ಲಾ ದೇವನ ಕಲೆ ಎಂದೇ ನೀ ತಿಳಿ
ಅದರಿಂದ ನೀ ಕಲಿ
ನಗುನಗುತಾ ನಲಿ ನಲಿ, ಏನೇ ಆಗಲಿ ||ಪ||

ಜಗವಿದು ಜಾಣ ಚೆಲುವಿನ ತಾಣ
ಎಲ್ಲೆಲೂ ರಸದೌತಣ ನಿನಗೆಲ್ಲೆಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ  ||೧||

ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿಬಂದು ಚೇತನ ತಾಳಲೆಂದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳದಾಗ ||೨||

ಗೆಳಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವದು
ಮುಂದೆ ಯೌವನ ಮದುವೆ ಬಂಧನ
ಎಲ್ಲೆಲು ಹೊಸ ಜೀವನ ಅಹ ಎಲ್ಲೆಲು ಹೊಸ ಜೀವನ
ಜೊತೆಯದು ದೊರೆತಾಗ
ಮೈಮನ ಮರೆತಾಗ  ||೩||

ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಅದರೊಳು ಹೊಸದಾದ ರುಚಿ ಇದೆ ಸವಿನೋಡ ||೪||

Nagunaguta Nali Nali, Bangarada Manushya, G.K. Venkatesh, Hunasuru Krishnamurthy, 1972, P.B. Srinivas, Dr. Rajkumar, Bharathi, Balakrishna, Lokanath, Srinath, Vajramuni, Dwarakish