ಉದಯಕುಮಾರ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಉದಯಕುಮಾರ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜೂನ್ 8, 2018

ಸ್ಕೂಲ್ ಮಾಸ್ಟರ್ : ಸ್ವಾಮಿದೇವನೆ ಲೋಕಪಾಲನೆ

ಹಾಡು: ಸ್ವಾಮಿದೇವನೆ ಲೋಕಪಾಲನೆ 
ಚಲನಚಿತ್ರ: ಸ್ಕೂಲ್ ಮಾಸ್ಟರ್ 
ಸಂಗೀತ ನಿರ್ದೇಶಕರು: ಟಿ. ಜಿ. ಲಿಂಗಪ್ಪ
ಕವಿ: ಸೋಸಲೆ ಅಯ್ಯಾ ಶಾಸ್ತ್ರಿಗಳು
ಹಾಡಿದವರು: ಟಿ. ಜಿ. ಲಿಂಗಪ್ಪ, ಎ.ಪಿ. ಕೋಮಲ,  ಕೆ. ರಾಣಿ
ಪಾತ್ರದಾರಿಗಳು: ಬಿ.ಆರ್. ಪಂತುಲು, ಉದಯಕುಮಾರ್, ಶಿವಾಜಿ ಗಣೇಶನ್, ಬಾಲಕೃಷ್ಣ, ನರಸಿಂಹರಾಜು, ಬಿ. ಸರೋಜಾದೇವಿ, ಜೆಮಿನಿ ಗಣೇಶನ್
ಚಿತ್ರದ ನಿರ್ದೇಶಕರು: ಬಿ.ಆರ್. ಪಂತುಲು
ನಿರ್ಮಾಪಕರು: ಬಿ.ಆರ್. ಪಂತುಲು (ಪದ್ಮಿನಿ ಪಿಚ್ಚರ್ಸ್)
ಹಾಡು ಕೇಳಿ...

ಸ್ವಾಮಿದೇವನೆ ಲೋಕಪಾಲನೆ 
ತೇ ನಮೋಸ್ತು ನಮೋಸ್ತುತೇ |
ಪ್ರೇಮದಿಂದಲಿ ನೋಡು ನಮ್ಮನು 
ತೇ ನಮೋಸ್ತು ನಮೋಸ್ತುತೇ || ಪ ||

ದೇವ ದೇವನೆ ಹಸ್ತ ಪಾದ-
ಗಳಿಂದಲೂ ಮನದಿಂದಲೂ |
ನಾವು ಮಾಡಿದ ಪಾಪವೆಲ್ಲವ 
ಹೋಗಲಾಡಿಸು ಬೇಗನೆ || ೧ ||

ವಿಜಯ ವಿದ್ಯಾರಣ್ಯ ಕಟ್ಟಿದ 
ಚಾಮುಂಡಾಂಬೆಯ ನಾಡಿನ |
ಮನೆಯ ಮಕ್ಕಳ ಐಕ್ಯ ಗಾನವ
ಲಾಲಿಸಿ ಪರಿಪಾಲಿಸೈ || ೨ ||

Labels: Swami Devane Loka Palane, School Master, T.G. Lingappa, Kanagal Prabhakara Shastry, 1958, B.R. Pantulu, Udaya Kumar, Shivaji Ganeshan, Gemini Ganeshan, Balakrishna, Narasimharaju, B.R. Saroja Devi

ಸ್ಕೂಲ್ ಮಾಸ್ಟರ್ : ಭಾಮೆಯ ನೋಡಲು ತಾ ಬಂದ

ಹಾಡು: ಭಾಮೆಯ ನೋಡಲು ತಾ ಬಂದ
ಚಲನಚಿತ್ರ: ಸ್ಕೂಲ್ ಮಾಸ್ಟರ್ 
ಸಂಗೀತ ನಿರ್ದೇಶಕರು: ಟಿ. ಜಿ. ಲಿಂಗಪ್ಪ
ಕವಿ: ಚಿ. ಕಣಗಾಲ್ ಪ್ರಭಾಕರ ಶಾಸ್ತ್ರಿ
ಹಾಡಿದವರು: ಸೂಲಮಂಗಲಮ್ ಆರ್. ರಾಜಲಕ್ಷ್ಮಿ
ಪಾತ್ರದಾರಿಗಳು: ಬಿ.ಆರ್. ಪಂತುಲು, ಉದಯಕುಮಾರ್, ಶಿವಾಜಿ ಗಣೇಶನ್, ಬಾಲಕೃಷ್ಣ, ನರಸಿಂಹರಾಜು, ಬಿ. ಸರೋಜಾದೇವಿ, ಜೆಮಿನಿ ಗಣೇಶನ್
ಚಿತ್ರದ ನಿರ್ದೇಶಕರು: ಬಿ.ಆರ್. ಪಂತುಲು
ನಿರ್ಮಾಪಕರು: ಬಿ.ಆರ್. ಪಂತುಲು (ಪದ್ಮಿನಿ ಪಿಚ್ಚರ್ಸ್)
ಹಾಡು ಕೇಳಿ...

ಭಾಮೆಯ ನೋಡಲು ತಾ ಬಂದ
ಬೃಂದಾವನದಿಂದ ಮುಕುಂದ
ಭಾಮೆಯ ನೋಡಲು ತಾ ಬಂದ || ಪ ||

ಕಣ್ಸನ್ನೆಯಲೇ ಕನ್ಯೆಯ ಮನ ಸೆಳೆದ
ಚಿನ್ಮಯ ಮೂರುತಿ ಶ್ರೀಗೋವಿಂದ || ೧ ||

ಬಾಗಿಲ ಮರೆಯಾಗಿ ನಾಗೋಲಿಯ ದಿನ
ರಾಗೋಲ್ಲಾಸದಿ ಊದಿದ ಕೊಳಲಿನ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಆಗರಿವಾಯಿತು ಅವನೇ ಜನಾರ್ದನ || ೨ ||

Labels: Bhameya Nodalu Taa Banda, School Master, T.G. Lingappa, Kanagal Prabhakara Shastry, 1958, B.R. Pantulu, Udaya Kumar, Shivaji Ganeshan, Gemini Ganeshan, Balakrishna, Narasimharaju, B.R. Saroja Devi

ಬುಧವಾರ, ಅಕ್ಟೋಬರ್ 30, 2013

ಕಲ್ಪವೃಕ್ಷ : ಜಯತೇ, ಸತ್ಯಮೇವ ಜಯತೇ : Jayate Satyameva Jayate

ಹಾಡು: ಜಯತೇ, ಜಯತೇ, ಜಯತೇ, ಸತ್ಯಮೇವ ಜಯತೇ
ಚಲನಚಿತ್ರ: ಕಲ್ಪವೃಕ್ಷ
ಸಂಗೀತ ನಿರ್ದೇಶಕರು: ಜಯದೇವ
ಕವಿ: ಕು. ರಾ. ಸೀತಾರಾಮಶಾಸ್ತ್ರಿ
ವರ್ಷ: 1969
ಹಾಡುಗಾರರು: ಮನ್ನಾ ಡೇ, ಅಂಬರ ಕುಮಾರ್, ಕೃಷ್ಣಾ ಕಲ್ಲೆ
ಪಾತ್ರದಾರಿಗಳು: ಉದಯಕುಮಾರ್, ಲೀಲಾವತಿ, ಶ್ರೀನಾಥ್, ಬಾಲಕೃಷ್ಣ, ಕೆ. ಎಸ್. ಅಶ್ವಥ್
ಚಿತ್ರದ ನಿರ್ದೇಶಕರು: ಕು. ರಾ. ಸೀತಾರಾಮಶಾಸ್ತ್ರಿ
ನಿರ್ಮಾಪಕರು: ಭಾವನಾ ನಿರ್ಮಾಣ

ಹಾಡು ಕೇಳಿ 

ಜಯತೇ, ಜಯತೇ, ಜಯತೇ
ಸತ್ಯಮೇವ ಜಯತೇ, ಸತ್ಯಮೇವ ಜಯತೇ, ಸತ್ಯಮೇವ ಜಯತೇ ।।ಪ।।

ಬೇವ ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡಕ ಬಯಸೆ ಕೆಡುವೆ ಖಚಿತ ಪಡೆವೆ ನೋವು ಖಂಡಿತ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೧||

ಮಧುವಿಗಿಂತ ಮಧುರವಾದ ಮಾತು ಮನಸು ಕಾಯಕ
ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ
ಉಳಿಸಿಕೊಳ್ಳಿ ಹಿರಿಯ ನಡತೆ ಗಳಿಸಿಕೊಳ್ಳಿ ಮಾನ್ಯತೆ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೨||

ಮಧುರ ಭಾವ ತುಂಬಿದಂತ ಮನಸೆ ದೇವ ಮಂದಿರ
ಸಾತ್ವಿಕನಿಗೆ ನಿಲುಕದಂತ ನಿಧಿಯೇ ಇಲ್ಲ ಬಲ್ಲಿರಾ
ಸರಳ ಜೀವಿಗೆಂದಿಗೂ ಸೋಲೇ ಇಲ್ಲ ಕಾಣಿರಾ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೩||

ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ
ಅಂತರಂಗದಲ್ಲೆ ಇರುವ ಅಂತರಾತ್ಮ ಕಾಣದೆ
ಆತ್ಮ ಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೪||


Jayate Satyameva Jayate, Kalpavriksha, Jayadeva, Ku.Ra. Seetarama Shastri, 1969, Manna De, Udayakumar, Leelavathi, Srinath, Balakrishna, K.S. Ashwath