ಸೋಮವಾರ, ನವೆಂಬರ್ 11, 2013

ಬೆಟ್ಟದ ಹುಲಿ : ಆಡುತಿರುವಾ ಮೋಡಗಳೇ : Adutirava Modagale

ಹಾಡು: ಆಡುತಿರುವಾ ಮೋಡಗಳೇ  
ಚಲನಚಿತ್ರ: ಬೆಟ್ಟದ ಹುಲಿ 
ಸಂಗೀತ ನಿರ್ದೇಶಕರು: ಟಿ.ಜಿ.ಲಿಂಗಪ್ಪ
ಕವಿ: ಮುಜಾಫರ್ ಶಹಜಹಾನ್ ಪುರಿ

ವರ್ಷ: 1965
ಹಾಡುಗಾರರು: ಪಿ. ಬಿ. ಶ್ರೀನಿವಾಸ್
ಪಾತ್ರದಾರಿಗಳು: ಡಾ|| ರಾಜಕುಮಾರ್, ಜಯಂತಿ, ಉದಯಕುಮಾರ್, ಎಂ.ಪಿ. ಶಂಕರ್
ಚಿತ್ರದ ನಿರ್ದೇಶಕರು: ಎ.ವಿ.ಶೇಷಗಿರಿರಾವ್ 

ನಿರ್ಮಾಪಕರು: ಭಗವತಿ ನಿರ್ಮಾಣ
ಹಾಡು ಕೇಳಿ...

ಆಡುತಿರುವಾ ಮೋಡಗಳೇ ಹಾರುತಿರುವಾ ಹಕ್ಕಿಗಳೇ
ಯಾರ ತಡೆಯೂ ನಿಮಗಿಲ್ಲಾ ನಿಮ್ಮ ಭಾಗ್ಯ ನಮಗಿಲ್ಲಾ    ||ಪ||   

ಒಬ್ಬನು ತನ್ನಯ ಸಲುವಾಗಿ ಹಲವರ ದೋಚಿ ನಗುವಾಂತಾ
ಒಬ್ಬನೆಲ್ಲೋ ನಗುತಿರಲು ಕೋಟಿ ಮಂದಿ ಅಳುವಂತಾ
ಲೋಕವಿದುವಂತೆ ಹೋಯ್ ಪಾಪದಾ ಸಂತೆ
ಪ್ರೀತಿಯಲ್ಲಿ ನೀತಿಯೆಲ್ಲಿ ಶಾಂತಿಯು ಎಲ್ಲಿದೆ ಜಗದಲ್ಲಿ    ||೧||

ಮನುಜರು ಮನುಜರ ದಾರಿಯಲಿ ಮುಳ್ಳನು ಹಾಸಿ ಮೆರೆಯುವರು
ಆಸೆಯಿಂದ ಮನೆಕಟ್ಟಿ ಕಡೆಗೆ ಮಣ್ಣಲಿ ಮಲಗುವರು
ಲೋಕದೀ ಆಟ ಹೊಯ್ ಜೀವ ಜಂಜಾಟ 
ಭೇಧ ಭಾವ ಆಳುತಿರುವಾ ಲೋಕದ ನ್ಯಾಯದ ನೆರಳಲ್ಲಿ   ||೨||

Labels: Adutirava Modagale, Bettada Huli, T.G. Lingappa, Muzaffar Shahajahan Puri, 1965, Dr. Rajkumar, Jayanti, Udayakumar, M.P. Shankar

ಕರ್ಣ : ಆ ಕರ್ಣನಂತೆ ನೀ ದಾನಿಯಾದೆ : Aa Karnanante Nee Daniyade

ಹಾಡು: ಆ ಕರ್ಣನಂತೆ ನೀ ದಾನಿಯಾದೆ
ಚಲನಚಿತ್ರ: ಕರ್ಣ
ಸಂಗೀತ ನಿರ್ದೇಶಕರು: ಎಂ. ರಂಗರಾವ್
ಕವಿ: ಚಿ.ಉದಯಶಂಕರ್
ವರ್ಷ: 1986
ಹಾಡುಗಾರರು: ಕೆ. ಜೆ. ಯೇಸುದಾಸ್
ಪಾತ್ರದಾರಿಗಳು: ವಿಷ್ಣುವರ್ಧನ್, ಸುಮಲತಾ, ಕೆ.ಎಸ್. ಆಶ್ವಥ್, ಅವಿನಾಶ್
ಚಿತ್ರದ ನಿರ್ದೇಶಕರು: ಭಾರ್ಗವ
ನಿರ್ಮಾಪಕರು: ಅಮೃತ ಕಲಾ 

ಹಾಡು ಕೇಳಿ...

ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ    ||ಪ|| 

ಕಸದಂತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ ಕಣ್ಣೀರು ತಂದರು
ಕಸದಂತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ ಕಣ್ಣೀರು ತಂದರು
ನಿನ್ನಂತ ರಂಗವಾ ಅವರೇನು ಬಲ್ಲರು
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು  ||೧||

ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೇ ಆಡೋದು ದೇವರು
ಇಂದಲ್ಲಾ ನಾಳೆ ಸಾಯೋದೆ ಎಲ್ಲರು
ಏನಾದರೇನೀಗಾ  ನಿನ್ನನ್ನು ಮರೆಯರು    ||೨||

ಪ್ರೀತಿಯಲಿ ಸುಖವುಂಟು ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು ನಿನಗೊಂದು ಬೆಲೆಯುಂಟು
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ 
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು   ||೩||
Labels: Aa Karnanante Nee Daniyade, Karna, M. Ranga Rao, Chi. Udayashankar, 1986, Vishnuvardhan, Sumalata, K.S. Aswath, Avinash

ಜಿಮ್ಮಿಗಲ್ಲು : ತುತ್ತು ಅನ್ನ ತಿನ್ನೋಕೆ : Tuttu Anna Tinnoke

ಹಾಡು: ತುತ್ತು ಅನ್ನ ತಿನ್ನೋಕೆ
ಚಲನಚಿತ್ರ: ಜಿಮ್ಮಿಗಲ್ಲು
ಸಂಗೀತ ನಿರ್ದೇಶಕರು: ವಿಜಯಭಾಸ್ಕರ್
ಕವಿ: ಚಿ.ಉದಯಶಂಕರ್
ವರ್ಷ: 1982
ಹಾಡುಗಾರರು: ವಿಷ್ಣುವರ್ಧನ್

ಪಾತ್ರದಾರಿಗಳು: ವಿಷ್ಣುವರ್ಧನ್, ಶ್ರೀಪ್ರಿಯಾ, ಸುಂದರಕೃಷ್ಣ ಅರಸ್
ಚಿತ್ರದ ನಿರ್ದೇಶಕರು: ಕೆ.ಎಸ್.ಎಲ್. ಸ್ವಾಮಿ (ರವಿ)
ನಿರ್ಮಾಪಕರು: ನವನಿಧಿ ಚಿತ್ರ

ಹಾಡು ಕೇಳಿ...

ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ    ||ಪ|| 
 

ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಹಳ್ಳಿ ನನ್ನಾ,ಹೋಗೋ ಅಂದರೇನು

ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು    ||೧|| 

ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ಕಷ್ಟ ಒಂದೇ ಬರದು,ಸುಖವು ಬರದೆ ಇರದು

ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರ್ತೈತೆ ಆಂ  ||೨|| 

ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೆ ನಂಗೆ,ಅಪ್ಪ ಅಮ್ಮ ಎಲ್ಲಾ

ಸಾಯೋಗಂಟ ನಂಬಿದವರ ಕೈ ಬಿಡೋಕಿಲ್ಲಾ   ||೩||  

Labels:  Tuttu Anna Tinnoke, Jimmy Gallu, Vijaya Bhaskar, Chi. Udayashankar, 1982, Vishnuvardhan, Sripriya, Sundarakrishna Urs