ಚಿ.ಉದಯಶಂಕರ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚಿ.ಉದಯಶಂಕರ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜುಲೈ 4, 2014

ನೋಡಿ ಸ್ವಾಮಿ ನಾವಿರೋದು ಹೀಗೆ : ನೋಡಿ ಸ್ವಾಮಿ ನಾವಿರೋದು ಹೀಗೆ : Nodi Swami Navirode Heege

ಹಾಡು: ನೋಡಿ ಸ್ವಾಮಿ ನಾವಿರೋದು ಹೀಗೆ
ಚಲನಚಿತ್ರ: ನೋಡಿ ಸ್ವಾಮಿ ನಾವಿರೋದು ಹೀಗೆ
ಸಂಗೀತ ನಿರ್ದೇಶಕರು: ಜಿ.ಕೆ.ವೆಂಕಟೇಶ್
ಕವಿ: 
ಚಿ. ಉದಯಶಂಕರ್
ವರ್ಷ: 1983
ಹಾಡುಗಾರರು: 
ಎಸ್.ಪಿ.ಬಾಲಸುಬ್ರಹ್ಮಣ್ಯಂ
ಪಾತ್ರದಾರಿಗಳು: ಶಂಕರ್ ನಾಗ್, ಅನಂತ್ ನಾಗ್, ಲಕ್ಷ್ಮಿ, ರಮೇಶ್ ಭಟ್, ಅರುಂಧತಿ ನಾಗ್, ಲೋಕನಾಥ್, ಮಾ. ಮಂಜುನಾಥ್, ಉದಯಕುಮಾರ್
ಚಿತ್ರದ ನಿರ್ದೇಶಕರು: ಶಂಕರ್ ನಾಗ್

ನಿರ್ಮಾಪಕರು: ಗಾಯತ್ರಿ ಚಿತ್ರಾಲಯ (ರಮೇಶ್ ಭಟ್)
ಹಾಡು ಕೇಳಿ...

ನೋಡಿ ಸ್ವಾಮಿ ನಾವಿರೋದು ಹೀಗೆ
ನೋಡಿ ಸ್ವಾಮಿ, ನೋಡಿ ಸ್ವಾಮಿ ||ಪ||

ನಾಳೆ ಎನ್ನುವ ಚಿಂತೆ ಮನದಲಿ ನಮಗಿಲ್ಲ
ನೆನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೋಲ್ಲ
ಇಂದು ಏನು ಬೇಕು ಅದರ ಚಿಂತೆ ಸಾಕು; ಅಷ್ಟೆ
ಇಂದು ಏನು ಬೇಕು ಅದರ ಚಿಂತೆ ಸಾಕು
ಈ ಬದುಕು ಸಾಗೋ ರೀತಿ ಹೀಗೆ ||೧||

ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು
ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು
ಯಾರು ಮಿತ್ರರಲ್ಲಾ ಯಾರು ಶತ್ರುವಲ್ಲ; ಅಷ್ಟೆ
ಯಾರು ಮಿತ್ರರಲ್ಲಾ ಯಾರು ಶತ್ರುವಲ್ಲ
ಈ ಬಗೆಯ ಬದುಕು ನಮದು ಎಂದೂ ||೨||

Labels: Nodi Swami Navirode Heege, Nodi Swami Navirode Heege, G.K. Venkatesh, Chi. Udayashankar, 1983, Shankar Nag, Anant Nag, Ramesh Bhat, Lakshmi, Ma. Manjunath, Udaya Kumar, Arundhati Nag, Lokanath

ಸೋಮವಾರ, ನವೆಂಬರ್ 11, 2013

ಕರ್ಣ : ಆ ಕರ್ಣನಂತೆ ನೀ ದಾನಿಯಾದೆ : Aa Karnanante Nee Daniyade

ಹಾಡು: ಆ ಕರ್ಣನಂತೆ ನೀ ದಾನಿಯಾದೆ
ಚಲನಚಿತ್ರ: ಕರ್ಣ
ಸಂಗೀತ ನಿರ್ದೇಶಕರು: ಎಂ. ರಂಗರಾವ್
ಕವಿ: ಚಿ.ಉದಯಶಂಕರ್
ವರ್ಷ: 1986
ಹಾಡುಗಾರರು: ಕೆ. ಜೆ. ಯೇಸುದಾಸ್
ಪಾತ್ರದಾರಿಗಳು: ವಿಷ್ಣುವರ್ಧನ್, ಸುಮಲತಾ, ಕೆ.ಎಸ್. ಆಶ್ವಥ್, ಅವಿನಾಶ್
ಚಿತ್ರದ ನಿರ್ದೇಶಕರು: ಭಾರ್ಗವ
ನಿರ್ಮಾಪಕರು: ಅಮೃತ ಕಲಾ 

ಹಾಡು ಕೇಳಿ...

ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ    ||ಪ|| 

ಕಸದಂತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ ಕಣ್ಣೀರು ತಂದರು
ಕಸದಂತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ ಕಣ್ಣೀರು ತಂದರು
ನಿನ್ನಂತ ರಂಗವಾ ಅವರೇನು ಬಲ್ಲರು
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು  ||೧||

ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೇ ಆಡೋದು ದೇವರು
ಇಂದಲ್ಲಾ ನಾಳೆ ಸಾಯೋದೆ ಎಲ್ಲರು
ಏನಾದರೇನೀಗಾ  ನಿನ್ನನ್ನು ಮರೆಯರು    ||೨||

ಪ್ರೀತಿಯಲಿ ಸುಖವುಂಟು ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು ನಿನಗೊಂದು ಬೆಲೆಯುಂಟು
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ 
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು   ||೩||
Labels: Aa Karnanante Nee Daniyade, Karna, M. Ranga Rao, Chi. Udayashankar, 1986, Vishnuvardhan, Sumalata, K.S. Aswath, Avinash

ಜಿಮ್ಮಿಗಲ್ಲು : ತುತ್ತು ಅನ್ನ ತಿನ್ನೋಕೆ : Tuttu Anna Tinnoke

ಹಾಡು: ತುತ್ತು ಅನ್ನ ತಿನ್ನೋಕೆ
ಚಲನಚಿತ್ರ: ಜಿಮ್ಮಿಗಲ್ಲು
ಸಂಗೀತ ನಿರ್ದೇಶಕರು: ವಿಜಯಭಾಸ್ಕರ್
ಕವಿ: ಚಿ.ಉದಯಶಂಕರ್
ವರ್ಷ: 1982
ಹಾಡುಗಾರರು: ವಿಷ್ಣುವರ್ಧನ್

ಪಾತ್ರದಾರಿಗಳು: ವಿಷ್ಣುವರ್ಧನ್, ಶ್ರೀಪ್ರಿಯಾ, ಸುಂದರಕೃಷ್ಣ ಅರಸ್
ಚಿತ್ರದ ನಿರ್ದೇಶಕರು: ಕೆ.ಎಸ್.ಎಲ್. ಸ್ವಾಮಿ (ರವಿ)
ನಿರ್ಮಾಪಕರು: ನವನಿಧಿ ಚಿತ್ರ

ಹಾಡು ಕೇಳಿ...

ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ    ||ಪ|| 
 

ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಹಳ್ಳಿ ನನ್ನಾ,ಹೋಗೋ ಅಂದರೇನು

ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು    ||೧|| 

ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ಕಷ್ಟ ಒಂದೇ ಬರದು,ಸುಖವು ಬರದೆ ಇರದು

ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರ್ತೈತೆ ಆಂ  ||೨|| 

ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೆ ನಂಗೆ,ಅಪ್ಪ ಅಮ್ಮ ಎಲ್ಲಾ

ಸಾಯೋಗಂಟ ನಂಬಿದವರ ಕೈ ಬಿಡೋಕಿಲ್ಲಾ   ||೩||  

Labels:  Tuttu Anna Tinnoke, Jimmy Gallu, Vijaya Bhaskar, Chi. Udayashankar, 1982, Vishnuvardhan, Sripriya, Sundarakrishna Urs

ಬುಧವಾರ, ಅಕ್ಟೋಬರ್ 30, 2013

ಗಿರಿಕನ್ಯೆ : ಏನೆಂದೂ ನಾ ಹೇಳಲಿ : Enendu Naa Hadali

ಹಾಡು: ಏನೆಂದೂ ನಾ ಹೇಳಲಿ
ಚಲನಚಿತ್ರ: ಗಿರಿಕನ್ಯೆ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ.ಉದಯಶಂಕರ್
ವರ್ಷ: 1977
ಹಾಡುಗಾರರು: ಡಾ|| ರಾಜಕುಮಾರ್
ಪಾತ್ರದಾರಿಗಳು: ಡಾ|| ರಾಜಕುಮಾರ್, ಜಯಮಾಲ, ಸಂಪತ್, ವಜ್ರಮುನಿ, ಪ್ರಭಾಕರ್, ತೂಗುದೀಪ ಶ್ರೀನಿವಾಸ್
ಚಿತ್ರದ ನಿರ್ದೇಶಕರು: ದೊರೈ-ಭಗವಾನ್
ನಿರ್ಮಾಪಕರು: ಭಾವನಾ ನಿರ್ಮಾಣ
ಹಾಡು ಕೇಳಿ...


ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ ||೧||

ಜೇನುಗಳೆಲ್ಲಾ ಅಲೆಯುತ ಹಾರಿ
ಕಾಡೆಲ್ಲಾ..ಕಾಡೆಲ್ಲಾ..ಕಾಡೆಲ್ಲಾ
ಹನಿಹನಿ ಜೇನು ಸೇರಿಸಲೇನು
ಬೇಕು ಎಂದಾಗ ತನದೆನ್ನುವ ||೨||

ಕೆಸರಿನ ಹೂವು, ವಿಷದ ಹಾವು
ಭಯವಿಲ್ಲ ಭಯವಿಲ್ಲ ಭಯವಿಲ್ಲಾ
ಚೆಲುವಿನದೆಲ್ಲಾ ರುಚಿಸುವುದೆಲ್ಲ
ಕಂಡು ಬಂದಾಗ ಬೇಕೆನ್ನುವಾ ||೩||

ಪ್ರಾಣಿಗಳೇನು ಗಿಡಮರವೇನು
ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲಾ ಉಳಿಸುವುದಿಲ್ಲ
ತನ್ನ ಹಿತಕಾಗಿ ಹೋರಾಡುವ ||೪||

ನುಡಿಯುವುದೊಂದು ನಡೆಯುವುದೊಂದು
ಎಂದೆಂದು ಎಂದೆಂದು ಎಂದೆಂದೂ
ಪಡೆಯುವುದೊಂದು ಕೊಡುವುದು ಒಂದು
ಸ್ವಾರ್ಥಿ ತಾನಾಗಿ ಮೆರೆದಾಡುವ ||೫||


Enendu Naa Hadali, Girikanye, Rajan-Nagendra, Chi.Udayashankar, 1977, Dr. Rajkumar, Jayamala, Vajramuni, Sampath, Prabhakar, Toogudeepa Srinivas