ಬುಧವಾರ, ಅಕ್ಟೋಬರ್ 30, 2013

ಗಿರಿಕನ್ಯೆ : ಏನೆಂದೂ ನಾ ಹೇಳಲಿ : Enendu Naa Hadali

ಹಾಡು: ಏನೆಂದೂ ನಾ ಹೇಳಲಿ
ಚಲನಚಿತ್ರ: ಗಿರಿಕನ್ಯೆ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ.ಉದಯಶಂಕರ್
ವರ್ಷ: 1977
ಹಾಡುಗಾರರು: ಡಾ|| ರಾಜಕುಮಾರ್
ಪಾತ್ರದಾರಿಗಳು: ಡಾ|| ರಾಜಕುಮಾರ್, ಜಯಮಾಲ, ಸಂಪತ್, ವಜ್ರಮುನಿ, ಪ್ರಭಾಕರ್, ತೂಗುದೀಪ ಶ್ರೀನಿವಾಸ್
ಚಿತ್ರದ ನಿರ್ದೇಶಕರು: ದೊರೈ-ಭಗವಾನ್
ನಿರ್ಮಾಪಕರು: ಭಾವನಾ ನಿರ್ಮಾಣ
ಹಾಡು ಕೇಳಿ...


ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ ||೧||

ಜೇನುಗಳೆಲ್ಲಾ ಅಲೆಯುತ ಹಾರಿ
ಕಾಡೆಲ್ಲಾ..ಕಾಡೆಲ್ಲಾ..ಕಾಡೆಲ್ಲಾ
ಹನಿಹನಿ ಜೇನು ಸೇರಿಸಲೇನು
ಬೇಕು ಎಂದಾಗ ತನದೆನ್ನುವ ||೨||

ಕೆಸರಿನ ಹೂವು, ವಿಷದ ಹಾವು
ಭಯವಿಲ್ಲ ಭಯವಿಲ್ಲ ಭಯವಿಲ್ಲಾ
ಚೆಲುವಿನದೆಲ್ಲಾ ರುಚಿಸುವುದೆಲ್ಲ
ಕಂಡು ಬಂದಾಗ ಬೇಕೆನ್ನುವಾ ||೩||

ಪ್ರಾಣಿಗಳೇನು ಗಿಡಮರವೇನು
ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲಾ ಉಳಿಸುವುದಿಲ್ಲ
ತನ್ನ ಹಿತಕಾಗಿ ಹೋರಾಡುವ ||೪||

ನುಡಿಯುವುದೊಂದು ನಡೆಯುವುದೊಂದು
ಎಂದೆಂದು ಎಂದೆಂದು ಎಂದೆಂದೂ
ಪಡೆಯುವುದೊಂದು ಕೊಡುವುದು ಒಂದು
ಸ್ವಾರ್ಥಿ ತಾನಾಗಿ ಮೆರೆದಾಡುವ ||೫||


Enendu Naa Hadali, Girikanye, Rajan-Nagendra, Chi.Udayashankar, 1977, Dr. Rajkumar, Jayamala, Vajramuni, Sampath, Prabhakar, Toogudeepa Srinivas

ಕಲ್ಪವೃಕ್ಷ : ಜಯತೇ, ಸತ್ಯಮೇವ ಜಯತೇ : Jayate Satyameva Jayate

ಹಾಡು: ಜಯತೇ, ಜಯತೇ, ಜಯತೇ, ಸತ್ಯಮೇವ ಜಯತೇ
ಚಲನಚಿತ್ರ: ಕಲ್ಪವೃಕ್ಷ
ಸಂಗೀತ ನಿರ್ದೇಶಕರು: ಜಯದೇವ
ಕವಿ: ಕು. ರಾ. ಸೀತಾರಾಮಶಾಸ್ತ್ರಿ
ವರ್ಷ: 1969
ಹಾಡುಗಾರರು: ಮನ್ನಾ ಡೇ, ಅಂಬರ ಕುಮಾರ್, ಕೃಷ್ಣಾ ಕಲ್ಲೆ
ಪಾತ್ರದಾರಿಗಳು: ಉದಯಕುಮಾರ್, ಲೀಲಾವತಿ, ಶ್ರೀನಾಥ್, ಬಾಲಕೃಷ್ಣ, ಕೆ. ಎಸ್. ಅಶ್ವಥ್
ಚಿತ್ರದ ನಿರ್ದೇಶಕರು: ಕು. ರಾ. ಸೀತಾರಾಮಶಾಸ್ತ್ರಿ
ನಿರ್ಮಾಪಕರು: ಭಾವನಾ ನಿರ್ಮಾಣ

ಹಾಡು ಕೇಳಿ 

ಜಯತೇ, ಜಯತೇ, ಜಯತೇ
ಸತ್ಯಮೇವ ಜಯತೇ, ಸತ್ಯಮೇವ ಜಯತೇ, ಸತ್ಯಮೇವ ಜಯತೇ ।।ಪ।।

ಬೇವ ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡಕ ಬಯಸೆ ಕೆಡುವೆ ಖಚಿತ ಪಡೆವೆ ನೋವು ಖಂಡಿತ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೧||

ಮಧುವಿಗಿಂತ ಮಧುರವಾದ ಮಾತು ಮನಸು ಕಾಯಕ
ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ
ಉಳಿಸಿಕೊಳ್ಳಿ ಹಿರಿಯ ನಡತೆ ಗಳಿಸಿಕೊಳ್ಳಿ ಮಾನ್ಯತೆ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೨||

ಮಧುರ ಭಾವ ತುಂಬಿದಂತ ಮನಸೆ ದೇವ ಮಂದಿರ
ಸಾತ್ವಿಕನಿಗೆ ನಿಲುಕದಂತ ನಿಧಿಯೇ ಇಲ್ಲ ಬಲ್ಲಿರಾ
ಸರಳ ಜೀವಿಗೆಂದಿಗೂ ಸೋಲೇ ಇಲ್ಲ ಕಾಣಿರಾ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೩||

ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ
ಅಂತರಂಗದಲ್ಲೆ ಇರುವ ಅಂತರಾತ್ಮ ಕಾಣದೆ
ಆತ್ಮ ಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ
ಸತ್ಯವಾದ ಘನತೆ, ಸೋಲೇ ಕಾಣದಂತೆ  ||೪||


Jayate Satyameva Jayate, Kalpavriksha, Jayadeva, Ku.Ra. Seetarama Shastri, 1969, Manna De, Udayakumar, Leelavathi, Srinath, Balakrishna, K.S. Ashwath