ಹಾಡು: ಏನೆಂದೂ ನಾ ಹೇಳಲಿ
ಚಲನಚಿತ್ರ: ಗಿರಿಕನ್ಯೆ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ.ಉದಯಶಂಕರ್
ವರ್ಷ: 1977
ಹಾಡುಗಾರರು: ಡಾ|| ರಾಜಕುಮಾರ್
ಪಾತ್ರದಾರಿಗಳು: ಡಾ|| ರಾಜಕುಮಾರ್, ಜಯಮಾಲ, ಸಂಪತ್, ವಜ್ರಮುನಿ, ಪ್ರಭಾಕರ್, ತೂಗುದೀಪ ಶ್ರೀನಿವಾಸ್
ಚಿತ್ರದ ನಿರ್ದೇಶಕರು: ದೊರೈ-ಭಗವಾನ್
ನಿರ್ಮಾಪಕರು: ಭಾವನಾ ನಿರ್ಮಾಣ
ಹಾಡು ಕೇಳಿ...
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ ||೧||
ಜೇನುಗಳೆಲ್ಲಾ ಅಲೆಯುತ ಹಾರಿ
ಕಾಡೆಲ್ಲಾ..ಕಾಡೆಲ್ಲಾ..ಕಾಡೆಲ್ಲಾ
ಹನಿಹನಿ ಜೇನು ಸೇರಿಸಲೇನು
ಬೇಕು ಎಂದಾಗ ತನದೆನ್ನುವ ||೨||
ಕೆಸರಿನ ಹೂವು, ವಿಷದ ಹಾವು
ಭಯವಿಲ್ಲ ಭಯವಿಲ್ಲ ಭಯವಿಲ್ಲಾ
ಚೆಲುವಿನದೆಲ್ಲಾ ರುಚಿಸುವುದೆಲ್ಲ
ಕಂಡು ಬಂದಾಗ ಬೇಕೆನ್ನುವಾ ||೩||
ಪ್ರಾಣಿಗಳೇನು ಗಿಡಮರವೇನು
ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲಾ ಉಳಿಸುವುದಿಲ್ಲ
ತನ್ನ ಹಿತಕಾಗಿ ಹೋರಾಡುವ ||೪||
ನುಡಿಯುವುದೊಂದು ನಡೆಯುವುದೊಂದು
ಎಂದೆಂದು ಎಂದೆಂದು ಎಂದೆಂದೂ
ಪಡೆಯುವುದೊಂದು ಕೊಡುವುದು ಒಂದು
ಸ್ವಾರ್ಥಿ ತಾನಾಗಿ ಮೆರೆದಾಡುವ ||೫||
Enendu Naa Hadali, Girikanye, Rajan-Nagendra, Chi.Udayashankar, 1977, Dr. Rajkumar, Jayamala, Vajramuni, Sampath, Prabhakar, Toogudeepa Srinivas
ಚಲನಚಿತ್ರ: ಗಿರಿಕನ್ಯೆ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಚಿ.ಉದಯಶಂಕರ್
ವರ್ಷ: 1977
ಹಾಡುಗಾರರು: ಡಾ|| ರಾಜಕುಮಾರ್
ಪಾತ್ರದಾರಿಗಳು: ಡಾ|| ರಾಜಕುಮಾರ್, ಜಯಮಾಲ, ಸಂಪತ್, ವಜ್ರಮುನಿ, ಪ್ರಭಾಕರ್, ತೂಗುದೀಪ ಶ್ರೀನಿವಾಸ್
ಚಿತ್ರದ ನಿರ್ದೇಶಕರು: ದೊರೈ-ಭಗವಾನ್
ನಿರ್ಮಾಪಕರು: ಭಾವನಾ ನಿರ್ಮಾಣ
ಹಾಡು ಕೇಳಿ...
ಏನೆಂದೂ ನಾ ಹೇಳಲಿ
ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ
ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ
ಏನೊಂದೂ ಬಾಳಿಸನು ಜಗದಲ್ಲಿ ||೧||
ಜೇನುಗಳೆಲ್ಲಾ ಅಲೆಯುತ ಹಾರಿ
ಕಾಡೆಲ್ಲಾ..ಕಾಡೆಲ್ಲಾ..ಕಾಡೆಲ್ಲಾ
ಹನಿಹನಿ ಜೇನು ಸೇರಿಸಲೇನು
ಬೇಕು ಎಂದಾಗ ತನದೆನ್ನುವ ||೨||
ಕೆಸರಿನ ಹೂವು, ವಿಷದ ಹಾವು
ಭಯವಿಲ್ಲ ಭಯವಿಲ್ಲ ಭಯವಿಲ್ಲಾ
ಚೆಲುವಿನದೆಲ್ಲಾ ರುಚಿಸುವುದೆಲ್ಲ
ಕಂಡು ಬಂದಾಗ ಬೇಕೆನ್ನುವಾ ||೩||
ಪ್ರಾಣಿಗಳೇನು ಗಿಡಮರವೇನು
ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲಾ ಉಳಿಸುವುದಿಲ್ಲ
ತನ್ನ ಹಿತಕಾಗಿ ಹೋರಾಡುವ ||೪||
ನುಡಿಯುವುದೊಂದು ನಡೆಯುವುದೊಂದು
ಎಂದೆಂದು ಎಂದೆಂದು ಎಂದೆಂದೂ
ಪಡೆಯುವುದೊಂದು ಕೊಡುವುದು ಒಂದು
ಸ್ವಾರ್ಥಿ ತಾನಾಗಿ ಮೆರೆದಾಡುವ ||೫||
Enendu Naa Hadali, Girikanye, Rajan-Nagendra, Chi.Udayashankar, 1977, Dr. Rajkumar, Jayamala, Vajramuni, Sampath, Prabhakar, Toogudeepa Srinivas
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ